Saturday, May 15, 2021

ನೊಂದವರ ಪಾಲಿಗೆ ಆಶಾಕಿರಣವಾದ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ್ ಪೂಜಾರಿ ಬಳ್ಳಾಲ್ ಬಾಗ್

 ದ್ವನಿ ಇಲ್ಲದವರ ದ್ವನಿ,ಕರಾವಳಿಯ ಹುಲಿ,ಯುವಕರ ಆದರ್ಶ ನಮ್ಮ ಬಿರುವೆರ್ ಉದಯಣ್ಣ..

-----------------------------------


ನೊಂದವರ ಪಾಲಿಗೆ ಆಶಾಕಿರಣವಾದ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ್ ಪೂಜಾರಿ ಬಳ್ಳಾಲ್ ಬಾಗ್


✍️ಉದಯ್ ಕುಂದಾಪುರ

            (ಮುಂಬೈ)


ಬಡವರ ,ನೊಂದವರ ,ತುಳಿ ಕ್ಕೊಳಗಾದವರ ಪಾಲಿಗೆ ಪ್ರೀತಿಯ ಅಣ್ಣ..

ಕಿರಿಯರ ನಿರ್ಲಕ್ಷದಿಂದ ಅನಾಥರಾದ ಹಿರಿಯರಿಗೆ ಆಶ್ರಯ ಕೊಟ್ಟು ಸಲಹುವ ಪ್ರೀತಿಯ ಮಗ.

ಜೀವನದಲ್ಲಿ ಭವಿಷ್ಯದ ಬರವಸೆಗಳನ್ನೆಲ್ಲ ಕಳೆದುಕೊಂಡು ಕೈ ಚೆಲ್ಲಿ ಕುಳಿತ ಸಾವಿರಾರು ಯುವಕರಿಗೇ ಭರವಸೆ ಮೂಡಿಸುವ ಪ್ರೀತಿಯ ಗೆಳೆಯ.

ನಗು ಮೊಗದ ಸರದಾರ "ಬಿರುವೇರ್ ಕುಡ್ಲದ" ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್...!


ಹೊಸ ತಲೆಮಾರಿನ ಪೀಳಿಗೆಗೆ ಇರುವ ತಾಕತ್ತು, ಸಾವಿನೊಂದಿಗೆ ಬೇಕಾದ್ರೂ ಕೈಕುಲುಕಿ ಬರಬಲ್ಲ ನಿರ್ಭೀತ ಮನಸ್ಥಿತಿಯ ಗಟ್ಟಿತನ ಇವರದ್ದು..!

ಜೀವನ ಮತ್ತು ಸಮಾಜ ಒದಗಿಸಿರೋ ಅವಕಾಶವನ್ನು ಬಡವರ ಕಣ್ಣೀರನ್ನು ಒರೆಸಲು ಬಳಸಿಕೊಂಡರು.!

"ಹಠ ಮತ್ತು ದ್ವೇಷ ಸಾಧಿಸುವ ಗುಣವನ್ನು ನಾನು ಯಾವತ್ತೋ ಬಿಟ್ಟಿದ್ದೇನೆ.ಜೀವ ಬೇಕಾದ್ರೂ ಕೊಡುವ ಗೆಳೆಯರಿದ್ದಾರೆ.ಬೆಂಬಲಿಸುವ ಜನರಿದ್ದಾರೆ.ಮತ್ತೇನು ಬೇಕು ಹೇಳಿ"ಅನ್ನುವ ಇವರು ಜನ ನಾಯಕನು ಹೌದು.ಜನ ಸೇವಕನು ಹೌದು!


ಉದಯ್ ಪೂಜಾರಿಯವರು ಕಟ್ಟಿ ಬೆಳೆಸಿದ "ಬಿರುವೇರ್ ಕುಡ್ಲ" ಇವತ್ತು ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡು ಅಶಕ್ತರಿಗೆ ಸೇವೆಯ ನೆರಳನ್ನು ನೀಡುತ್ತಿದೆ.ಅದರಲ್ಲೂ ಮಂಗಳೂರು ಹುಲಿವೇಷದ ಸಂಘಟನೆಯ ಮೂಲಕ ಸಾವಿರಾರು ಕಾರ್ಯಕರ್ತರನ್ನು ಒಗ್ಗೂಡಿಸಿ ಎರಡು ಕೋಟಿಗಿಂತಲೂ ಹೆಚ್ಚು ಮೊತ್ತದ ಸಹಾಯವನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು.


ಕಳೆದ ವರ್ಷ ಕೊರೋನ ಸಂದರ್ಭದಲ್ಲಿ ಇವರ ಸೇವೆ ಅನನ್ಯವಾದುದು.ಕರಾವಳಿಯ ಎಲ್ಲ ತಾಲೂಕುಗಳಲ್ಲಿ ಬಿರುವೆರ್ ಕುಡ್ಲದ ಶಾಖೆ ತೆರೆದು ಎಲ್ಲ ವರ್ಗದ ದುರ್ಬಲರ ಸೇವೆಗೆ ಚಾಲನೆ ಕೊಟ್ಟರು.ಸುಮಾರು 30 ಲಕ್ಷ ಫುಡ್ ಕಿಟ್ಸ್ ನ್ನೂ ಕೇವಲ ಮಂಗಳೂರು ನಗರದಲ್ಲೇ ಹಂಚಿದ್ದಾರೆ ಅಂದರೆ ಇವರ ಸೇವಾಗುಣದ ವಿಶಾಲತೆಯನ್ನು ನೀವು ಆಲೋಚಿಸಬಹುದು.


 ಬಿಲ್ಲವರ ಬಗ್ಗೆ ಯಾರೂ ಏನೇ ಹೇಳಲಿ ಮೊದಲಾಗಿ ದ್ವನಿ ಎತ್ತುವ ಯುವಕ ಇವರು. ಹೆಸರಿಗಾಗಿ ಅಧ್ಯಕ್ಷ ಉಪಾಧ್ಯಕ್ಷ ಆಗುವ ಮುಂದಾಳುಗಳು ನನ್ನಲ್ಲಿ ತುಂಬಾ ಜನ ಇದ್ದಾರೆ.ಆದರೆ ಕೆಲಸ ಮಾಡುವ ಇಚ್ಛಾಶಕ್ತಿಯ ಕೊರತೆ ಅವರಲ್ಲಿ ಕಾಣುತ್ತದೆ.

ಕೋಟಿ ಚೆನ್ನಯರು ಎಂದೂ ಸುಮ್ಮ ಸುಮ್ಮನೆ ತಪ್ಪೆಸಗಿದವರಲ್ಲ.ಹಾಗಂತ ಅನ್ಯಾಯ ಕಂಡಾಗ ಕಣ್ಣಿದ್ದೂ ಕುರುಡರಂತೆ ಇದ್ದವರಲ್ಲ.ಅದೇ ಆದರ್ಶದಲ್ಲಿ ಉದಯ್ ಬದುಕುತ್ತಿದ್ದಾರೆ..


" ಹಿರಿಯರು ಎನಿಸಿಕೊಂಡ ಸಮಾಜದ ಮುಖಂಡರು ಸ್ಥಾನಮಾನಗಳನ್ನು ಯುವಕರಿಗೆ ಒಪ್ಪಿಸಿ ಗೌರವಯುತವಾಗಿ ಹೊರ ನಡೆಯಲು ಇದು ಸಕಾಲ.ಇಲ್ಲವಾದರೆ ಕಾಲ ಕಳೆದಂತೆ ನೀವು ನೇಪಥ್ಯಕ್ಕೆ ಸರಿಯು ದಲ್ಲದೇ ಸಮಾಜಕ್ಕೆ ಸಾರತಿಯಾಗಬೇಕಾದ ಸಂಘ ಸಂಸ್ಥೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದು ಕೊಳ್ಳುದರಲ್ಲಿ ಸಂದೇಹ ವಿಲ್ಲ."


ಈ ನಿಟ್ಟಿನಲ್ಲಿ ಬಿರುವೆರ್ ಉದಯ್ ಅಣ್ಣ ನಮಗೆಲ್ಲ ಆಶಾಕಿರಣ ಎನಿಸಿಕೊಂಡಿದ್ದಾರೆ.ಪ್ರತಿ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುವ  ಮನಸ್ಸು ಅವರದ್ದು. ಏನೇ ಸಹಾಯ ಬೇಕಾದ್ರೂ ನಾನಿದ್ದೇನೆ ನಿಮ್ಮ ಜೊತೆಗೆ ಅನ್ನುವ ಭರವಸೆ ಕೊಡುವ ಮನಸ್ಸಿರುವ ಉದಯ್ ಇನ್ನಷ್ಟು ಬೆಳೆಯಲಿ ಮತ್ತಷ್ಟು ಬೆಳಗಲಿ🙏

0 comments: