Tuesday, February 6, 2018

ಬಿಲ್ಲವರು ತಿಳಿದು ಕೊಳ್ಳಬೇಕಾದ ಕೆಲ ಮಾಹಿತಿ

1)ಬ್ರಹ್ಮಶ್ರೀ ನಾರಾಯಣ ಗುರು ತಪಸ್ಸು ಮಾಡಿದ ಜಾಗದ ಹೆಸರು -ಮರುತ್ವ ಮಲೈ 2)ಬ್ರಹ್ಮಶ್ರೀ ನಾರಾಯಣ ಗುರು ಹುಟ್ಟಿದ ಸ್ಥಳ ಮತ್ತು ದಿನಾಂಕ (DOB) -ಚೆಂಬಲಂತಿ, 1856* 3)ಬ್ರಹ್ಮಶ್ರೀ ನಾರಾಯಣ ಗುರು ಅವರು ಯಾವ ವರ್ಷದಲ್ಲಿ ಮಂಗಳೂರಿಗೆ ಮೊದಲ ಭೇಟಿ ಮಾಡಿದರು -1908 4)ಮಂಗಳೂರು ಕುದ್ರೋಳಿಯಲ್ಲಿ ಶಿವಲಿಂಗವನ್ನು ಯಾರು ಸ್ಥಾಪನೆ ಮಾಡಿದರು ಮತ್ತು ಯಾವ ವರ್ಷದಲ್ಲಿ -ನಾರಾಯಣ ಗುರುಗಳು 1912 5)ಮಂಗಳೂರು ಕುದ್ರೋಳಿಯಲ್ಲಿ ಪ್ರಪ್ರಥಮ ಮುಖ್ಯ ಅರ್ಚಕರಾಗಿದ್ದವರ ಹೆಸರು ಮೊದಲ ಬಿಲ್ಲವ ಮುಖ್ಯ ಅರ್ಚಕರು : ಶ್ರೀ ಕೃಷ್ಣ ಶಾಂತಿ 6)ಕೋಟಿಚೆನ್ನಯರರು ಕುಲದೇವರಾಗಿ ಯಾರನ್ನು ಆರಾಧಿಸುತ್ತಿದ್ದರು - ಕೆಂಪು ಕೆಮ್ಮಲಜೆನಾಗಬೆರ್ಮೆರ್ 7)ಕೋಟಿಚೆನ್ನಯರ ಭಾವನ ಹೆಸರು- (ಕಿನ್ನಿದಾರುವಿನ ಪತಿಯ ಹೆಸರು) ಪಯ್ಯಬೈದ್ಯ ದೇಯಿ ಬೈದಿತಿಯ ಬಾಲ್ಯದ ಹೆಸರು - ಸುವರ್ಣ ಕೇದಗೆ 8)ಕೋಟಿಚೆನ್ನಯರು ಎಣ್ಣ್ಚ್ಮೂರು ಪಂಜಕ್ಕೆ ಬಂದಾಗ ರಾಜ ಉಡುಗೊರೆ ಕೊಟ್ಟ ಜಾಗ ಅಥವಾ ಬೀಡು ನ ಹೆಸರು ಏನು -ಐವತೊಕ್ಲು

9)ಒಣಗಿದ ಗದ್ದೆಯನ್ನು ಉಳುವುದಕ್ಕೆ ಏನೆಂದು ಕರೆಯುತ್ತಾರೆ - ಪೊಡಿಕ್ಕಲ್ 10)ತುಳುನಾಡಿನಲ್ಲಿ ಹಾಲೆಯ ಮರದ ತೊಗಟೆಯ ರಸವನ್ನು ಕುಡಿಯುವ ದಿನ -ಆಟಿ ಅಮಾವಾಸ್ಯೆ 11)ತುಳು ತಿಂಗಳಾದ ಬೇಶದಲ್ಲಿ ಬರುವ ಒಂದು ಪ್ರಮುಖ ಆಚರಣೆ -ಪತ್ತನಾಜೆ 12) ನಾಟಿ ವೇಳೆ ಹೆಂಗಸರು ಹಾಡುವ ಒಂದು ಬಗೆಯ ಹಾಡು - ಓಬೇಲೆ ಉಳುಮೆ ಅಥವಾ ಕಂಬಳದ ಸಂಧರ್ಭದಲ್ಲಿ ಎರಡು ಎತ್ತುಗಳು ಜೊತೆಯಾಗಿ ಸಾಗಲು ಅವುಗಳ ಕುತ್ತಿಗೆಗೆ , ಭುಜಕ್ಕೆ ತಾಗಿಕೊಂಡು ಕಟ್ಟುವ ಮರದ ಸಾಧನಕ್ಕೆ ಏನು ಹೆಸರು - ನೊಗ 13)ಮೊದಲ ವಿಶ್ವ ತುಳು ಸಮ್ಮೇಳನ ಯಾವಾಗ ಮತ್ತು ಎಲ್ಲಿ ನಡೆಯಿತು -ಡಿಸೆಂಬರ್ 10 to 13, 2009, ಉಜಿರೆಯಲ್ಲಿ 14)ಭಾರತದ ಈಗಿನ ಮಹಿಳಾ ಕಬಡ್ಡಿ ತಂಡದ ನಾಯಕಿಯ ಹೆಸರು - ಮಮತಾ ಪೂಜಾರ್ತಿ 15)ಬಿಲ್ಲವರಲ್ಲಿ ಪಸಿದ್ಧವಾಗಿ ಎಷ್ಟು ಬರಿಗಳಿವೆ -16 16)ಬಿಲ್ಲವ/ಬಿರುವೆರ್ ಪದದ ಅರ್ಥ ಏನು -ಬಿಲ್ಲುಗಾರ, ಬಿಲ್ಲು ವಿದ್ಯೆ ಗೊತ್ತಿದ್ದವರು 17)ಬಿಲ್ಲವರನ್ನು ಬೈದ್ಯ ಎಂದು ಯಾಕೆ ಕರೆಯುತ್ತಾರೆ - ಬೈದ್ಯ ಅಂದರೆ ವೈದ್ಯರು, ನಾಟಿ ವೈದ್ಯರು

0 comments: