Tuesday, May 14, 2019

ಬಡತನವನ್ನು ಮೆಟ್ಟಿ ನಿಂತ ಬಿಲ್ಲವ ಸಾಧಕ ಜಯ ಸಿ ಸುವರ್ಣ ಅವರಿಗೆ ಹುಟ್ಟು ಹಬ್ಬದ ಸಂಭ್ರಮ

ಆಡ್ವೇ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಜಯ ಸಿ ಸುವರ್ಣ ಅವರು ತಮ್ಮ ಹದಿನಾಲ್ಕನೇ ವರ್ಷದ ವಯಸ್ಸಿನಲ್ಲಿ ಮುಂಬಯಿ ಅತ್ತ ದಾಪು ಕಾಲು ಇಡುತ್ತಾರೆ.ಬಡತನವನ್ನು ಮೆಟ್ಟಿ ನಿಂತು ಕ್ಲೀನರ್, ಸರ್ವರ್ ಮ್ಯಾನೇಜರ್ ಓನರ್ ಆಗಿ ಬೆಳೆದು ನಿಂತ ಜಯ ಸಿ ಸುವರ್ಣ ಅವರು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅದ್ಯಕ್ಷ ಬಿಲ್ಲವ ಅಸೋಸಿಯೇಷನ್ ಮುಂಬಯಿಯ ಗೌರವದ್ಯಕ್ಷಭಾರತ್ ಕೋ ಆಪರೇಟಿವ್ ಬ್ಯಾಂಕ್'ನ ಸ್ಥಾಪಕರು ಮಾಜಿ ಅಧ್ಯಕ್ಷರು ಹಾಗು ಕಾರ್ಯಧ್ಯಕ್ಷ ಜಯ ಸಿ ಸುವರ್ಣ ಕೂಡ ಹೌದು.ದಶಕಗಳಿಂದ ಸಮಾಜನಿರ್ಮಾಣ ಕಾರ್ಯಗಳನ್ನು ಮುಂದುವರೆಸಿ, ಸಮಾಜದ ದುರ್ಬಲ ವರ್ಗಕ್ಕೆ ಸಹಾಯಮಾಡಿ, ನಾರಾಯಣ ಗುರುಗಳ ಸಂದೇಶದಂತೆ ನಡೆದ ಇವರ ಸಾಧನೆಗೆ ಹಾಗೂ ಬಿಲ್ಲವ ಸಮಾಜಕ್ಕೆ ಇವರು ನೀಡಿದ ಕೊಡುಗೆಗಳಿಗಾಗಿ ೨೦೧೬ರಲ್ಲಿ 'ಬಿಲ್ಲವ ಭಾರ್ಗವ' ಎಂಬ ಬಿರುದನ್ನು ಮುಡಿಗೇರಿಸಿಕೊಂಡಿಸಿದ್ದಾರೆ.

0 comments: