Saturday, November 4, 2017

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ! ಸಾಧಿಸಿತೋರಿಸಿ ಬಿಟ್ಟರು ! ಸಮರ್ಥನೆ ಅಲ್ಲ, ಆದರೂ ಒಂದು ಹೆಣ್ಣಿಗೆ ಈ ರೀತಿ ಅವಮಾನ ಮಾಡುವುದು ಎಷ್ಟು ಸರಿ?

"Yatra Naryastu Pujyante, Ramante Tatra Devata,yatraitaastu na pujyante sarvaastatrafalaah kriyaah". Where women are honoured , divinity blossoms there, and where women are dishonoured, all action no matter how noble remain unfruitful.

ಇದು ಸಂಘದ ಶಿಕ್ಷಣ ಆದವರಿಗೆ ಅರಿಯಾಗಿ ಆರ್ಥ ಆಗಿರುತ್ತದೆ. ಸ್ವಯಂ ಸೇವಕ‌ ಸಂಘದ ಶಿಕ್ಷಣ ದಲ್ಲಿ ಮೊದಲ ಆದ್ಯತೆ ಹೆಣ್ಣು ಮಕ್ಕಳನ್ನು ಗೌರವಿಸುವುದು. ಅದು ಕಾಂಗ್ರೆಸ್ ಪಾರ್ಟಿ ಇರಲಿ, ಬಿಜೆಪಿ ಇರಲಿ, ನಿಮ್ಮ‌ ಸ್ವಂತ ಅಕ್ಕ ತಂಗಿಯೇ ಇರಲಿ, ಅಥವಾ ಬೇರೆಯವ ಅಕ್ಕ, ತಂಗಿ, ಇರಲಿ.

ಸನಾತನ ಧರ್ಮದಲ್ಲಿ ಮೊದಲ ಆದ್ಯತೆ ಹೆಣ್ಣು ಸಂತಾನವನ್ನು ಗೌರವದಿಂದ ಕಾಣುವುದು. ಬೇರೆ ಮನೆಯ ಹೆಣ್ಣುಮಕ್ಕಳನ್ನು ಗೌರವಿಸದ ಹಿಂದೂ ತನ್ನ ಮನೆಯ ಹೆಣ್ಣುಮಕ್ಕಳಿಗೆ ಎಷ್ಟು ಗೌರವ ನೀಡಿಯಾನು? ಸಂಘದ ಶಿಕ್ಷಣ ಪಡೆದವರೇ ಇದನ್ನು ಅರ್ಥ ಮಾಡಿಕೊಳ್ಳದೆ, ಕೇವಲ ಪಕ್ಷ ನೋಡಿ ಅವಮಾನ ಮಾಡುವ ಜನರಿಗೆ ಏನೆಂದು ಹೇಳೋಣ.

ಇವತ್ತಿನ ಕೆಲ ಜನರ ಕಮೆಂಟ್ ನೋಡಿದರೆ ಅಥವಾ ಪೋಸ್ಟ್ ನೋಡಿದರೆ ಅವರ ಮನೆಯ ಹೆಣ್ಣಿಗೆ ಯಾವ ರೀತಿ ಗೌರವ ನೀಡುತ್ತಾರೆ ಎಂದು ಗೊತ್ತಾಗುತ್ತದೆ. ಹಿಂದು ಅಂಥ ಹೇಳಿಕೊಂಡು ತಿರುಗಾಡಿದರೆ ಹಿಂದೂ ಆಗಲು ಸಾಧ್ಯವಿಲ್ಲ, ಅದರ ತತ್ವವನ್ನು ಅರ್ಥಮಾಡಿ ಜೀವನದಲ್ಲಿ ಪಾಲನೆ ಮಾಡುವವನೇ ನಿಜವಾದ ಹಿಂದೂ. ಹಿಂದೂ ಧರ್ಮದವರೇ ನಮ್ಮ ಸಮಾಜದ ಹೆಣ್ಣುಮಕ್ಕಳಿಗೆ ಗೌರವ ನೀಡದಿದ್ದರೆ ಇನ್ನು ಬೇರೆ ಸಮಾದವರು ನೀಡುತ್ತಾರಾ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎನ್ನುವ ಹಾಗೆ ಅವರ ರವರ ದೃಷ್ಟಿಕೋಣ ಇವತ್ತು ಕೆಲ ಫೇಸ್ ಬುಕ್ ನಲ್ಲಿ ಕಾಣಸಿಗುತ್ತದೆ. ಸಮರ್ಥನೆ ಅಲ್ಲ, ಆದರೂ ಒಂದು ಹೆಣ್ಣಿಗೆ ಈ ರೀತಿ ಅವಮಾನ ಮಾಡುವುದು ಎಷ್ಟು ಸರಿ?

0 comments: