![](https://blogger.googleusercontent.com/img/b/R29vZ2xl/AVvXsEj-LkWcFTJzJAajcxQsKVuE2rVF23A67W3eHh7KJLT1TzTInuxlBNfPO6Ez7OY8rzOv1q0_LD0eCROzHSYdCPwlQcsCoMDq5bz6eMStB-mSAKCUkWMYaO6eNfJrf69PVEUB__LJpMti248/s320/satyanna.jpg)
2019 ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಬಿರುಸಿನ ಕಾರ್ಯ ಚಟುವಟಿಕೆ ಆರಂಭಿಸಿದ್ದು ,ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಟಿಕೆಟ್ ಲೆಕ್ಕಾಚಾರ ಬಿರುಸಿನಿಂದ ನಡೆಯುತ್ತಿದೆ. ಉಡುಪಿ ಜಿಲ್ಲೆಗೆ ಶೋಭಾ ಕರಂದ್ಲಾಜೆಯವರು ಬೇಡ,ಒಂದು ವೇಳೆ ಬಿಜೆಪಿ ಶೋಭಾ ಕರಂದ್ಲಾಜೆಯವರಿಗೆ ಉಡುಪಿ ಜಿಲ್ಲೆಯಿಂದ ಟಿಕೆಟ್ ನೀಡಿದರೆ ಸೋಲು ಖಚಿತ ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ.ಉಡುಪಿ ಜಿಲ್ಲೆಯಿಂದ ಜಯಪ್ರಕಾಶ್ ಹೆಗ್ಡೆ ಟಿಕೆಟ್ ಆಕಾಂಕ್ಷಿಯಾಗಿದ್ದು ಇವರ ಸ್ಪರ್ಧೆಗೆ ಎಲ್ಲ ರೀತಿಯ ಲಾಬಿಗಳು ನೇರವಾಗಿ ಪರೋಕ್ಷವಾಗಿ ನಡೆಯುತ್ತಿದೆ.ಇತ್ತ ಕಡೆ ದಕ್ಷಿಣ ಕನ್ನಡದಲ್ಲೂ ನಳೀನ್ ಕುಮಾರ್ ಕಟೀಲ್ ಬದಲಾವಣೆಗೆ ಹಲವಾರು ಜನ ಪಟ್ಟು ಹಿಡಿದಿದ್ದಾರೆ .
ಕಳೆದ ಬಾರಿ ವಿಧಾನಸಭೆಯ ಮಂಗಳೂರು ಉತ್ತರ ವಲಯದಿಂದ ಟಿಕೆಟ್ ವಂಚಿತರಾದ ಸತ್ಯಜಿತ್ ಸುರತ್ಕಲ್ ಅವರ ಹೆಸರು ಸಂಸದ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದು, ದಶಕಗಳಿಂದ ಹಿಂದುತ್ವ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡ ಸತ್ಯಜಿತ್ ಸುರತ್ಕಲ್ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂಬುದು ಬಹುಜನರ ಅಪೇಕ್ಷೆಯಾಗಿದೆ. ಸಂಘ ಪರಿವಾರದ ಹಿರಿಯರನ್ನೂ ನಳಿನ್ ಕುಮಾರ್ ಕಟೀಲ್ ಮೂಲೆ ಗುಂಪು ಮಾಡಿದ್ದಾರೆ ,ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ನಳಿನ್ ಕುಮಾರ್ ತೋರುತ್ತಿದ್ದಾರೆ ಎಂಬ ಆರೋಪಗಳು ಬಹಳ ದಿನಗಳಿಂದ ಕೇಳಿಬರುತ್ತಿದೆ.ಕಳೆದ ಬಾರಿ ದಕ್ಷಿಣ ಕನ್ನಡದಲ್ಲಿ ಬಿಲ್ಲವರಿಗೆ ಕೇವಲ ಮೂಡಬಿದ್ರೆ ಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡಿದ್ದು ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಲ್ಲವರ ಕಡೆಗಣನೆಗೆ ಪರಿಹಾರವಾಗಿ ದಕ್ಷಿಣ ಕನ್ನಡದಲ್ಲಿ ಈ ಬಾರಿ ಬಿಜೆಪಿಯ ರಾಷ್ಟ್ರೀಯ ವರಿಷ್ಠರು ಸತ್ಯಜಿತ್ ಸುರತ್ಕಲ್ ಅವರಿಗೆ ಮಣೆ ಹಾಕುವುದು ಬಹುತೇಕ ಖಚಿತವೆನಿಸಿದೆ.
0 comments: