Monday, October 15, 2018

ಕುದ್ರೋಳಿ ದೇವಸ್ಥಾನದ ಟ್ರಸ್ಟ್ ನ್ನು ದೂಷಿಸುವವರ ಗಮನಕ್ಕೆ

1.ಕುದ್ರೋಳಿ ದೇವಸ್ಥಾನಕ್ಕೆ ಬಂದ ಮುಸ್ಲಿಂ ವ್ಯಕ್ತಿ ದೇವಿಗೆ ಹಿಂದೂ ಧರ್ಮದ ಪ್ರಕಾರ ಆರತಿ ಬೆಳಗಿಸಿದ್ದಾನೆ ಹೊರತು ಉಡುಪಿಯಲ್ಲಿ ನಡೆದಂತೆ ಅಲ್ಲಾನಿಗೆ ನಮಾಜ್ ಸಲ್ಲಿಸಿದ್ದಲ್ಲ 2.ಸುಬ್ರಹ್ಮಣ್ಯ ದೇವಾಲಯದಲ್ಲೂ ಪ್ರತೀದಿನ ಅಸಂಖ್ಯಾತ ಮುಸ್ಲಿಮರು ಸರ್ಪಸಂಸ್ಕಾರ, ಆಶ್ಲೇಷ ಪೂಜೆ ಇತ್ಯಾದಿ ನಡೆಸುತ್ತಿದ್ದಾರೆ ಇದಕ್ಕೆ ಯಾರ ಆಕ್ಷೇಪವೂ ಇಲ್ಲ 3.ಅಯೋಧ್ಯೆಯ ಜನ್ಮಭೂಮಿಯ ರಾಮನ ಮೂರ್ತಿಗೂ ಮುಸ್ಲಿಮರ ಪೂಜೆ ತಲುಪುತ್ತೆ ಆಕ್ಷೇಪಣೆ ಇದೆಯಾ?? 4.ದತ್ತಪೀಠದ ದಲ್ಲಿ ಇಮಾಮ್ ಸಾಹೇಬರ ಪೂಜೆಗೆ ಎಷ್ಟು ಹಿಂದೂಗಳು ಆಕ್ಷೇಪಿಸಿದ್ದಾರೆ?? 5.ನಮ್ಮ ಕಾರಣಿಕದ ಪಣೋಲಿಬೈಲಿನಲ್ಲಿ ಯಾವ ಮುಸ್ಲಿಮರ ಪ್ರವೇಶಕ್ಕೆ ಅಡ್ಡಿಪಡಿಸಲ್ಲ ನಮ್ಮ ತುಳುನಾಡಿನಲ್ಲಿ ದೇವಸ್ಥಾನಕ್ಕೆ ಬರುವ ಯಾವ ಮುಸ್ಲಿಮರಿಗೂ ಒಳಗೆ ಬರುವ ಮುನ್ನ ನೀನು ಬೀಫ್ ತಿಂದಿದ್ದೀಯ?, ಸ್ನಾನ ಮಾಡಿದ್ದೀಯ? ಎಂದು ಯಾರೂ ಕೇಳಲ್ಲ.. ಕಾರಣ ಇಲ್ಲಿನ ಪ್ರತಿಯೊಬ್ಬ ಮುಸ್ಲಿಮನಿಗೂ ನಮ್ಮ ದೈವ-ದೇವರುಗಳ ಕಲೆ ಕಾರಣಿಕದ ಅರಿವಿದೆ.. ಜಮೀರ್ ಅಹ್ಮದ್ ನನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸಲು ದೇವಾಲಯದ ಹೆಸರನ್ನು ಕೆಡಿಸುವ ಪ್ರಯತ್ನ ದಯವಿಟ್ಟು ಮಾಡಬೇಡಿ.

0 comments: