Sunday, January 20, 2019

ಬರಹಗಾರ್ತಿ ನಿರೂಪಕಿಯಾಗಿ ಚಿಗುರೊಡೆಯುತ್ತಿರುವ ಬಿಲ್ಲವ ಯುವಪ್ರತಿಭೆ. ಪ್ರಜ್ಞಾ ಪೂಜಾರಿ

#ಪ್ರಜ್ಞಾ_ಬಿ_ಪೂಜಾರಿ_ಓಡಿಲ್ನಾಳ
ಬರಹಗಾರ್ತಿ ನಿರೂಪಕಿಯಾಗಿ ಚಿಗುರೊಡೆಯುತ್ತಿರುವ ಬಿಲ್ಲವ ಯುವಪ್ರತಿಭೆ.

✍🏻 #ಚೇತನ್_ವರ್ಕಾಡಿ

ಬೆಳ್ತಂಗಡಿ ತಾಲೂಕು ಮದ್ದಡ್ಕ ಓಡಿಲ್ನಾಳ ಸಂಜೀವ ಪೂಜಾರಿ ಮತ್ತು ವಿಜಯ ದಂಪತಿಗಳ ಸುಪುತ್ರಿ *ಪ್ರಜ್ನ ಬಿ ಓಡಿಲ್ನಾಳ* ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಧ್ಯಮ ವರ್ಗದಲ್ಲಿ ಹುಟ್ಟಿದರು ಹೆತ್ತವರ ಶ್ರಮ ಬೆಂಬಲದಿಂದ ಹತ್ತಾರು ಕಡೆಗಳಲ್ಲಿ ಈ ಯುವಪ್ರತಿಭೆ ಇಂದು ಕಾರ್ಯಕ್ರಮ ನಿರೂಪಕಿ‌ಯಾಗಿಯೂ, ಉತ್ತಮ ಬರಹಗಾರ್ತಿ‌ಯಾಗಿಯೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಸುಮಾರು 80ಕ್ಕೂ ಮಿಕ್ಕ ಇವರ ಲೇಖನ‌ಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡು ಎಲ್ಲರ ಮೆಚ್ಚುಗೆ‌ಗೆ ಪಾತ್ರವಾಗಿದೆ.2012ರಲ್ಲಿ ಸೃಜನಾತ್ಮಕ ಬರವಣಿಗೆ ಎಂಬ ವಿಷಯದಲ್ಲಿ ರಾಜ್ಯ ಮಟ್ಟಕ್ಕೂ ಆಯ್ಕೆ ಆದ ಇವರು ಜಿಲ್ಲಾ ಮಟ್ಟದಲ್ಲಿ ನಡೆದ ಭಾಷಣ ಸ್ಪರ್ಧೆ‌ಯಲ್ಲಿ ಪಿಯುಸಿ ಕಾಲೇಜನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿ ಗೆದ್ದ ಪ್ರತಿಭೆ.ಭಾಷಣ,ಲೇಖನಗಳಲ್ಲಿ ಹಲವಾರು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿದ ಇವರ ಸಾಧನೆಯನ್ನು ಗುರುತಿಸಿ ಹಲವಾರು ಕಡೆ ಸನ್ಮಾನ ನೀಡಿ ಪುರಸ್ಕರಿಸಿರುತ್ತಾರೆ.

ಪ್ರಸ್ತುತ ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗದಲ್ಲಿ ಕಲಿಕೆಯನ್ನು ಮುಂದುವರಿಸುತ್ತಿರುವ ಪ್ರಜ್ನ ಬಿ ತಾನು ಓರ್ವೆ ಉತ್ತಮ ನಿರೂಪಕಿ ಹಾಗೂ ಬರಹಗಾರ್ತಿಯಾಗಬೇಕೆಂಬ ಕನಸನ್ನು ಹೊಂದಿದ್ದಾರೆ. ತನ್ನನ್ನು ಕಷ್ಟ‌ಪಟ್ಟು ಈ ಮಟ್ಟಕ್ಕೆ ಬೆಳೆಸಿದ ಹೆತ್ತವರ ಎಲ್ಲಾ ಕನಸನ್ನು ನನಸಾಗಿಸುವ ಮಹದಾಸೆಯನ್ನು ಹೊಂದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ನಿರೂಪಕಿಯಾಗಿ‌ಯೂ, ಬರಹಗಾರ್ತಿ‌ಯಾಗಿಯೂ ಎತ್ತರಕ್ಕೆ ಏರುತ್ತಿರುವ ಈ  ಯುವಪ್ರತಿಭೆ‌ಗೆ ಇನ್ನಷ್ಟು ಪ್ರೋತ್ಸಾಹ ಬೆಂಬಲ ಅವಕಾಶಗಳು ಹರಿದುಬರಲಿ. *ಬಿಲ್ಲವ ಕುಡಿಯೊಂದು ತನ್ನದೆ ಶೈಲಿಯಲ್ಲಿ ಮುದ್ದಾದ ಸ್ವರದೊಂದಿಗೆ ಎಲ್ಲರ ಮನತಣಿಸುವ ಸುಂದರ ಕಾರ್ಯಕ್ರಮ‌ವನ್ನು ಅಂದವಾಗಿ ನಿರೂಪಿಸುವ* ಪ್ರಜ್ನ ಬಿ ಓಡಿಲ್ನಾಳ ಇನ್ನಷ್ಟು ವೇದಿಕೆಯಲ್ಲಿ ಮಿಂಚಲೆಂದು ನಮ್ಮಲೆರ ಹಾರೈಕೆಗಳು...
©BillavasPoojarys.

0 comments: