Sunday, February 24, 2019

ಮುದ್ದು ಮುಖದ ಬಿಲ್ಲವ ಯುವ ಪ್ರತಿಭೆ ಶ್ರೇಯಾ ಅಂಚನ್

ಅದೆಷ್ಟೋ ಬಿಲ್ಲವ ಪ್ರತಿಭೆಗಳು ಸಿನಿಮಾ ಜಗತ್ತಿನಲ್ಲಿ ಕಾಣ ಸಿಗುತ್ತಾರೆ ಅಂತಹವರಲ್ಲಿ ಶ್ರೇಯಾ ಅಂಚನ್ ಕೂಡಾ ಒಬ್ಬರು. ತಮ್ಮ ನಟನೆಯ ಮೂಲಕ ಗಮನಸೆಳೆದವರು.ತುಳುವಿನಲ್ಲಿ ಜೈ ತುಳುನಾಡ್ ಸಿನಿಮಾ ದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅನಂತರ ಕನ್ನಡದ ಸೂಪರ್ ಹಿಟ್ ಚಲನಚಿತ್ರ ಒಂದು ಮೊಟ್ಟೆ ಯ ಕಥೆ ಸಿನಿಮಾ ದಲ್ಲಿ ಪ್ರಮುಖ ನಟಿಯಾಗಿ ನಟಿಸಿ ಭೇಷ್ ಎನಿಸಿಕೊಂಡಿರುವ ಇವರು ಕಥೆಯೊಂದು ಶುರುವಾಗಿದೆ ಕನ್ನಡ ಸಿನಿಮಾ ದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಬಿಡುಗಡೆ ಗೊಳ್ಳಲಿರುವ ರಾಂಧವ ಎಂಬ ಕನ್ನಡದಲ್ಲಿ ನಾಯಕಿ ನಟಿಯಾಗಿ ನಟಿಸಿದ್ದಾರೆ.ಕನ್ನಡದ ಕಿರುತೆರೆಯಲ್ಲಿ ಪ್ರಸಾರಗೊಳ್ಳುತ್ತಿದ್ದ ಅರಮನೆ ಧಾರಾವಾಹಿ ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಲರ್ಸ್ ತಮಿಳು ಚಾನಲ್ ನಲ್ಲಿ ಪ್ರಸಾರ ಗೊಳ್ಳುತ್ತಿರುವ ಧಾರಾವಾಹಿ ತಿರುಮನಂ ಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರ ಮುಂದಿನ ಎಲ್ಲಾ ಸಿನಿ ಬದುಕು ಯಶಸ್ವಿಯಾಗಿರಲೀ ಎಂದು ಆಶಿಸುವ ನಮ್ಮ ಬಿಲ್ಲವೆರ್ ಪೇಜ್

0 comments: