Saturday, March 2, 2019

ಬಿಲ್ಲವ ನೊಬ್ಬ ಟಿಕೆಟ್ ಆಕಾಂಕ್ಷಿಯಾದರೆ ತಪ್ಪಂತೆ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರು ಟಿಕೆಟ್ ಆಕಾಂಕ್ಷಿಯಾದರೆ ಹಾಲಿ ಸಂಸದರು ಮತ್ತು ಹಾಲಿ ಸಂಸದರ ಕೃಪೆಯಿಂದ ಜವಾಬ್ದಾರಿಯನ್ನು ಪಡೆದ ಕೆಲವರಿಗೆ ಇದೀಗ ಋುಣ ತೀರಿಸುವ ಸಮಯ ಬಂದಂತೆ ಕಾಣುತಿದೆ. ಪ್ರಮುಖವಾಗಿ ಈ ಬಾರಿ ಸತ್ಯಜಿತ್ ಸುರತ್ಕಲ್ ಅವರು ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಹೊರಹೊಮ್ಮಿ ಅವರ ಬೆಂಬಲಿಗರು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತಪಡಿಸಿ ಕಟೌಟ್ ಹಾಕಿದ್ದು ಹಾಲಿ ಸಂಸದರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಬಿಲ್ಲವ ಟಿಕೆಟ್ ಆಕಾಂಕ್ಷಿಯ ಮೇಲೆ ತನ್ನೆಲ್ಲಾ ಬಲವನ್ನು ಛೂ ಬಿಡುತ್ತಿರುವ ಮಂಗಳೂರಿನ ಸರ್ವಾಧಿಕಾರಿ ನಾಯಕ, ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ಸ್ಥಾನೀಯ ಸಮಿತಿಯಿಂದ ಸೇರಿ ಹುದ್ದೆಗಳ ವಿಚಾರದಲ್ಲಿ ಸರ್ವಾಧಿಕಾರ ಮತ್ತು ಬಿಲ್ಲವ ವಿರೋಧಿ ಧೋರಣೆ ತೋರಿರುವ ಇವರು ಎಲ್ಲಿ ತಾನು ಅಧಿಕಾರ ಕಳೆದುಕೊಂಡು ಮೂಲೆಗುಂಪಾಗುತ್ತೇನೆ ಎಂಬ ಭಯ ಇವರಲ್ಲಿ ಆವರಿಸಿದೆ .ಇನ್ನು ಸತ್ಯಜಿತ್ ಸುರತ್ಕಲ್ ವಿರುದ್ಧ ಪತ್ರಿಕಾ ಹೇಳಿಕೆ ನೀಡಿದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಪ್ಲಸ್ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ದಕ್ಷಿಣ ಕನ್ನಡ ಬಿಜೆಪಿ ಚುನಾವಣಾ ಜವಾಬ್ದಾರಿ ಹೊಂದಿರುವ ಗೋಪಾಲಕೃಷ್ಣ ಹೇರಳೆ ಸಂಸದರ ಋಣ ತೀರಿಸಲು ನೀಡಿದ ಹೇಳಿಕೆ ಇಲ್ಲಿದೆ ನೋಡಿ.

ಲೋಕಸಭಾ ಚುನಾವಣೆಯಲ್ಲಿ ಯಾರು ಬಿಲ್ಲವ ವಿರೋಧಿ ಧೋರಣೆ ತೋರುತ್ತಾರೋ .ಅವರಿಗೆ ಬುದ್ಧಿ ಕಲಿಸಬೇಕು ಬಿಲ್ಲವರು ಒಗ್ಗಟ್ಟು ಬಿಲ್ಲವ ಸಮಾವೇಶಕ್ಕೆ ಸೀಮಿತವಾಗಬಾರದು ಜೈ ಬಿಲ್ಲವ

0 comments: