Monday, July 13, 2020

ಸಾಂಸ್ಕೃತಿಕ ರಂಗದಲ್ಲಿ ಕಾಲಿಡುತ್ತಿರುವ ಉದಯೋನ್ಮಖ ಪ್ರತಿಭೆ ಸನುಷಾ ಪೂಜಾರಿ

ನವ ಪರ್ವ ಫೌಂಡೇಶನ್(ರಿ) ಬೆಂಗಳೂರು ಕನ್ನಡ ಬೃಂದಾವನ ಹೆಜ್ಜೆಗೊಂದು ಗೆಜ್ಜೆ ನೃತ್ಯ ಸ್ಪರ್ಧೆಯಲ್ಲಿ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇದರ  ಆರು ಜನ ಕವಿರತ್ನರು ಭಾಗವಹಿಸಿ, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಆ ಕಲಾರತ್ನರಲ್ಲಿ ನಮ್ಮ ಸಂಘ,ಸಂಸ್ಥೆಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಸದಸ್ಯರಾದ ಹತ್ಯಡ್ಕ ಗ್ರಾಮದ ಬೂಡುಮುಗೇರು ನಿವಾಸಿ ಸೌಮ್ಯ ಪೂಜಾರಿ ಇವರ ಮಗಳಾದ ಕುಮಾರಿ ಸನುಷಾ  ಇವರು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಇವರಿಗೆ  ಬಾಲ್ಯದಲ್ಲಿ ಸಾಂಸ್ಕೃತಿಕ ರಂಗದಲ್ಲಿ ಕಾಲಿಡುತ್ತಿರುವ  ಉದಯೋನ್ಮಖ ಪ್ರತಿಭೆಯು ಇನಷ್ಟು ನಾಟ್ಯ ವೈಭವವನ್ನು  ಜನತೆಗೆ ತೋರಿಸಲಿ ಎಂಬುದು ಆಶಯ .ಈ ನಾಟ್ಯ ಪ್ರತಿಭೆಗೆ ನಾರಾಯಣ ಗುರು ಸೇವಾ ಸಂಘ ಅರಸಿನಮಕ್ಕಿ .ಮತ್ತು ಯುವವಾಹಿನಿ ಸಂಚಲನ ಸಮಿತಿ ಅರಸಿನಮಕ್ಕಿ ಇದರ ವತಿಯಿಂದ ಸನುಷಾ ಇವರಿಗೆ ಮತ್ತು ಪೋಷಕರಿಗೆ   ಹೃದಯಪೂರ್ವಕ ಅಭಿನಂದನೆಗಳು

1 comment: