Thursday, June 10, 2021

ನಟನಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಉಡುಪಿಯ ಸ್ನೇಹಾ ಕುಂದರ್

 #ಸ್ನೇಹ_ಕುಂದರ್_ಅಲೆವೂರ್ 💐💐💐

ಇವರು ಮೂಲತಃ ಉಡುಪಿಯ ಅಲೆವೂರು ಎಂಬ ಊರಿನ ಈ ಪ್ರತಿಭೆ#ಶ್ರೀಯುತ_ಪುತ್ರನ್_ಕುಂದರ್ ಹಾಗೂ#ಶ್ರೀಮತಿ_ವನಜಾಕ್ಷಿ_ಕುಂದರ್ ದಂಪತಿಗಳ ಮಗಳಾಗಿ ಜನಿಸಿದ ‌ಇವರು 1 ರಿಂದ 7 ರ ವರೆಗೆ ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆ ಅಲೆವೂರ್ ನಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ 8 ನೇ ತರಗತಿಯ ವಿದ್ಯಾಭ್ಯಾಸವನ್ನು ಗರ್ಲ್ಸ್ ಹೈ ಸ್ಕೂಲ್ ಉಡುಪಿಯಲ್ಲಿ ಮುಗಿಸಿ, 9 ರಿಂದ 10 ರ ವರೆಗೆ ಮುಲ್ಕಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ನಡೆಸಿ ನಂತರ ಪ್ರಥಮ, ದ್ವೀತಿಯ ಪಿ.ಯು.ಸಿ. ಪದವಿಯನ್ನು ಗರ್ಲ್ಸ್ ಕಾಲೇಜು ಉಡುಪಿಯಲ್ಲಿ ಪೂರೈಸಿದರು.

  ನಂತರ ಇವರು 5 ನೇ ತರಗತಿಯಲ್ಲಿರುವಾಗ ಯಕ್ಷಗಾನ ತರಗತಿಯನ್ನು ಪ್ರಾರಂಭ ಮಾಡಿದ್ದು ಸಂಜೀವ್ ಸುವರ್ಣ ಇಂದ್ರಾಳಿ ಇವರ ಹತಿರ ದ್ವೀತಿಯ ಪಿ.ಯು.ಸಿ. ಯ ವರೆಗೆ ಯಕ್ಷಗಾನ ತರಬೇತಿಯನ್ನೂ ಕೂಡ ಪಡೆದಿದ್ಧಾರೆ. ಪ್ರಥಮ ಪಿ.ಯು.ಸಿ. ಯಲ್ಲಿರುವಾಗ ದೃಶ್ಯ ಡ್ಯಾನ್ಸ್ ಗ್ರೂಪ್ ಮಂಚಿ ಇಲ್ಲಿ 2 ವರ್ಷ ಡಾನ್ಸ್ ಅಭ್ಯಾಸ ಮಾಡಿ ಹಲವಾರು ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸಿರುತ್ತಾರೆ. ಅನಂತರ ಡಾನ್ಸ್ ನಿಂದ ಇವರು ತಾಯಿ ಕಲಾಮಾತೆ ಶಾರದಾಂಭೆಯ ಸೇವೆ ಗೈಯ್ಯಲೆಂದು ತುಳು ನಾಟಕ ರಂಗ ಭೂಮಿಗೇ ಪ್ರವೇಶ ಮಾಡಿದರು. ಅಲ್ಲಿಂದ ಇವರ ಜೀವನ ಶೈಲಿಯೇ ಬದಲಾಯಿತು. ಇವರ ಮೊದಲ ನಾಟಕ ವಿಶು ರಾವ್ ಹವಂಜೆ ಇವರ ಗುರುಗಳಾಗಿದ್ಧಾರೆ.ಇವರು ಅಭಿನಯ ಮಾಡಿದ ನಾಟಕಗಳು, ಎನನ್ ನಂಬುಲೆ, ಪಾನ್ ಬೀಡ ಪಾಂಡುರಂಗೆ, ಕಥೆ ಏರ್ ಬರೆಪೆರ್, ಕುಂಕುಮ ಭಾಗ್ಯ, ಈ ಎನ್ನ ಸಿಂಗಾರಿ, ಆಲ್ ಎನ್ನಲ್, ಮಂತ್ರ ದೇವತೆ, ಬೊಜ್ಜ, ಏರೆಗ್ಲಾ ಪನರ ಪೋವೊಡ್ಚಿ, ಹಾಗೆಯೇ ಅವಾರ್ಡ್ ವಿನ್ ಆದ ನಾಟಕ "ಸತ್ಯನೇ ಪನ್ಪೆ ಸುಳ್ಳತ್ತ್" ಇತ್ಯಾದಿ. ಬೆಂಗಳೂರು, ಜೋಡುಕಲ್ಲು ಹೀಗೆ ಅನೇಕ ಕಡೆ ಪ್ರದರ್ಶನವನ್ನು ನೀಡಿರುತ್ತಾರೆ. ಹಾಗೆಯೇ ಬಹುಮಾನ ಸಿಕ್ಕ "ಬೊಜ್ಜ" ಎಂಬ ನಾಟಕ ಹಾಗೂ "ಎನ್ನಿಲೆಕ್ಕಾ ಆವಾ ನಮ" ಎಂಬ ನಾಟಕಗಳಲ್ಲಿ ಹಲವಾರು ಕಡೆ ಪ್ರದರ್ಶನವನ್ನು ಕೊಟ್ಟ ಇವರು ಅತಿಥಿ ಕಲಾವಿಧೆಯಾಗಿಯೂ ಹಲವಾರು ತಂಡಗಳಲ್ಲಿ ಹೆಸರುವಾಸಿಯಾಗಿದ್ಧಾರೆ.ಕಟಪಾಡಿ ನಿಮಿಷ ಕಲಾವಿದೆರ್ ನಾಟಕ ತಂಡದಲ್ಲಿ ಹಲವಾರು ನಾಟಕ ಪ್ರದರ್ಶನ ಕೊಟ್ಟಿರುತ್ತಾರೆ, ಹಾಗೆಯೇ ಉಧ್ಯಾವರ ನಾಟಕ ಕಾಂಫಿಟೇಷನ್ ನಲ್ಲಿ  ಅತ್ಯೋತ್ತಮ ಕಥಾ ನಾಯಕಿಯಾಗಿ ಇವರಿಗೆ ಪ್ರಥಮ ಪ್ರಶಸ್ತಿ ಲಭಿಸಿತು. ಅನಂತರ ಇವರು ಎಮ್.ಜಿ.ಎಮ್. ಕಾಲೇಜಿನಲ್ಲಿ ನಡೆದ ನಾಟಕ ಕಾಂಫಿಟೇಷನ್ ನಲ್ಲಿ ತೀರ್ಪುಗಾರರು ಮೆಚ್ಚಿದ ವಿಶೇಷ ನಟಿಯಾಗಿ ನಾಟಕ ರಂಗದಲ್ಲಿ ಮೆಂಚಿದ್ಧಾರೆ. ನಾಟಕದಲ್ಲಿ ಮುಂದೆ ಬಂದು ಹಲವಾರು ಕಾರ್ಯಕ್ರಮಗಳಲ್ಲಿ 16 ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿಯೂ ಜಡ್ಜ್ ಆಗಿಯೂ ಕೂಡಹೋಗಿದ್ಧಾರೆ. ಒಂದು ಭಾರಿ ಸನ್ಮಾನವನ್ನೂ ಕೂಡ ಪಡೆದಿದ್ಧಾರೆ.ಅಷ್ಟೇ ಅಲ್ಲದೇ ಇವರು  ಕಲ್ಲರ್ಸ್ ಕನ್ನಡ ಚಾನೇಲ್ ನಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಧಾರವಾಹಿಯಲ್ಲಿ 2 ಎಫಿಸೋಡ್ ನಲ್ಲಿ ತನ್ನ ಅಭಿನಯವನ್ನೂ ಕೂಡ ಇವರು ಕೊಟ್ಟಿರುತ್ತಾರೆ. ಇದು ನಮಗೆ ಬಹಳ ಹೆಮ್ಮೆಯ ವಿಚಾರವೂ ಕೂಡ ಹೌದು. ಹಲವಾರು ಚಲನಚಿತ್ರ, ಧಾರವಾಹಿಗಳಲ್ಲಿ ಇವರಿಗೆ ಅವಕಾಶ ಸಿಕ್ಕಿತು ಆದ್ರೆ ಇವರ ಕೆಲಸಕ್ಕೆ ತುಂಬಾ ತೊಂದ್ರೆ ಆದ ಕಾರಣ ಅದನ್ನು ಬಿಟ್ಟು ಬಿಟ್ಟರು. ಮುಕ್ತ ಟಿವಿ ನ್ಯೂಸ್ ಚಾನೇಲಿಗೆ ಇವರು ಅನ್ವೇಷಣೆಗೆ ಕೂಡ ಹೋಗಿದ್ಧರು. ನಾಟಕದಲ್ಲಿ ಇವರ ಇಡೀ ಜೀವನವೇ ಬದಲಾಗಿ ಹೋಯಿತು ಯಾರೂ ಕೂಡ ಗುರುತಿಸದ ಇವರನ್ನು ಈಗ ಎಲ್ಲರೂ ಪ್ರೀತಿಯಿಂದ ಮಾತಾಡಿಸುತ್ತಾರೆ ಇವರ ಜೀವನ ಇರೋತನಕ ನಾನು ನಾಟಕ ರಂಗ ಭೂಮಿಯಲ್ಲಿಯೇ ನನ್ನ ನಿರಂತರ ಪಯಣವನ್ನು ಮುಂದುವರೆಸುತ್ತಾ ಹೋಗಬೇಕೆಂಬುದೇ ಇವರ ಕನಸು. ಈಗ ಮಾಡೆಲಿಂಗ್ ಫೋಟೋ ಶೂಟ್ ಮಾಡ್ತಾ ಇದ್ಧಾರೆ. ಇವರ ಆಸೆ ನಾನು ಇನ್ನೂ ಆದಷ್ಟು ಹೆಸರುಗಳಿಸಬೇಕು, ನನ್ನ ಅಮ್ಮನನ್ನು ಚೆನ್ನಾಗಿ ನೋಡಬೇಕು ಎನ್ನುವುದು ಇವರ ಕನಸಾಗಿದೆ. ನಿಮ್ಮ ಆಸೆ ಖಂಡಿತವಾಗಿಯೂ ನೀವು ನಂಬಿರುವಂತಹ ಧೈವ-ದೇವರುಗಳು  ನೆರವೇರಿಸ್ತಾರೆಯೆಂಬ ಭರವಸೆ ನನಗಿದೆ. ಸಹೋದರಿ, ನಿಮ್ಮ ಅಭಿನಯವನ್ನು ನಾನು ಗಮನಿಸಿ ನಿಮಗೆ #ಅಭಿನಯ_ಶಾರದೆ ಯೆಂಬ ಬಿರುದನ್ನು ನೀಡುವುದರ ಮೂಲಕ ನಿಮಗೆ ಈ ಮೂಲಕ ಶುಭ ಹಾರೈಸುತ್ತೇನೆ.

 #ನಮ್ಮ_ಬಿಲ್ಲವೆರ್









1 comment:

  1. There are restrictions on how a lot of your bonus cash you may withdraw. It is the utmost amount of precise cash 온라인카지노 you'll be able to|you presumably can} win in a casino. Always verify the cap to positive you|ensure you|be certain to} receive an inexpensive sum. For instance, should you deposit $100, have the ability to|you presumably can} withdraw at least of|no less than} $1000.

    ReplyDelete